ಗ್ರಾಮೀಣ ಭಾಗದ ಜನರ ಕುಡಿಯುವ ನೀರಿಗಾಗಿ ರೂಪಿಸಿರುವ ಜೆಜೆಎಂ ಯೋಜನೆ ಸದ್ಬಳಕೆಯಾಗಬೇಕು – ಶಾಸಕ ಸಿ.ಬಿ.ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ: ನಿರಂತರವಾಗಿ ಕುಡಿಯುವ ನೀರಿನ ಸರಬರಾಜಿಗಾಗಿ ಪ್ರತಿ ಮನೆಗಳಿಗೆ ನಳಗಳನ್ನು ಹಾಕುವ ಮೂಲಕ ಯಾವುದೇ ರೀತಿಯಲ್ಲಿ ನೀರಿನ ಅಭಾವವಾಗಬಾರದೆಂದು ಕೇಂದ್ರ ಸರಕಾರ ಈ ಜಲಜೀವನ್ ಮಿಷನ್ ಯೋಜನೆಯನ್ನು ತಂದಿದ್ದು ಇದನ್ನು ನಾಗರೀಕರು
ಸದ್ಬಳಕೆ ಮಾಡಿಕೊಳ್ಳಬೆಕಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.


ತಾಲ್ಲೂಕಿನ ತಿಮ್ಮನಹಳ್ಳಿ ಮತ್ತು ಬರಕನಹಾಲ್‌ ಪಂಚಾಯಿತಿ ವ್ಯಾಪ್ತಿಯ ಸುಮಾರು 2 ಕೋಟಿ 85ಲಕ್ಷ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿಗೆ
ಶಾಸಕ ಸಿ.ಬಿ.ಸುರೇಶ್ ಬಾಬು ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ನಾಗರೀಕರಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಬೆಳಕು, ರಸ್ತೆ, ಮನೆಗಳನ್ನು ಆಡಳಿತ ವ್ಯವಸ್ಥೆಯ
ಜವಾಬ್ದಾರಿ ಅದರಂತೆ ಗಣಿಬಾದಿತ ಪ್ರದೇಶಾಭಿವೃದ್ದಿಯಲ್ಲಿ ತಾಲ್ಲೂಕಿಗೆ ಈಗಾಗಲೇ 7.5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಮನೆಗಳಿಲ್ಲದವರನ್ನು ಗ್ರಾಮಸಭೆಗಳಲ್ಲಿ ಆಯ್ಕೆಮಾಡಿ ತಿಳಿಸುವಂತೆ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಸೂಚನೆ ನೀಡಿದೆ ಅದರಂತೆ ಕುಡಿಯುವ ನೀರಿಗಾಗಿ ಜೆಜೆಎಂ ಯೋಜನೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ ಈ ನಿಟ್ಟಿನಲ್ಲಿ ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವತಿಯಿಂದ ಜಲ ಜೀವನ್‌ ಮಿಷನ್ ಯೋಜನೆಯಿಂದ ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ಗ್ರಾಮಪಂಚಾಯಿತಿ  ವ್ಯಾಪ್ತಿಗೆ ಅಂದಾಜು ಮೊತ್ತ 95.10 ಲಕ್ಷ ರೂ ವೆಚ್ಚದಲ್ಲಿ ಸಬ್ಗಭೋವಿಹಟ್ಟಿ, ಎಂ ಗೊಲ್ಲರಹಟ್ಟಿ, ಎಂ ವಡ್ಡರಹಟ್ಟಿ, ಮೈಲಾಕಬ್ಬೆ ಗ್ರಾಮದವರೆಗೆ ಮನೆಗಳಿಗೆ ನಳ ಸಂಪರ್ಕಿಸುವ ಕಾಮಗಾರಿ. ಬರಕನಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ  99.80 ಲಕ್ಷ ರೂ ವೆಚ್ಚದಲ್ಲಿ ಅಜ್ಜೇನಹಳ್ಳಿ, ಬೆಳವಾಡಿ, ಚೌಡಮ್ಮನಪಾಳ್ಯ, ಕಣಿವೆಕ್ರಾಸ್, ತಿರುಮಲದೇವರಹಟ್ಟಿ, ಭೀಮಕ್ಕನಕಟ್ಟೆ
ಗ್ರಾಮದವರೆಗೆ ಮನೆಗಳಿಗೆ ನಳ ಸಂಪರ್ಕಿಸುವ ಅಭಿವೃದ್ಧಿ ಕಾಮಗಾರಿ ಇದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ  90.30  ಲಕ್ಷ ರೂ ವೆಚ್ಚದಲ್ಲಿ ಅಗ್ರಹಾರ, ಅಣೆಪಾಳ್ಯ, ಹಂದಿಗನಡು ಗ್ರಾಮದವರೆಗೆ ಮನೆಗಳಿಗೆ ನಳ ಸಂಪರ್ಕಿಸುವ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ
ಪೂಜೆಯನ್ನ ನೆರೆವೆರಿಸಿದ್ದು ಇದರ ಪ್ರಯೋಜನವನ್ನು ಈ ಭಾಗದ ಜನರು ಬಳಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಎಇಇ ಮಾರುತಿ, ತಿಮ್ಮನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ, ಉಪಾದ್ಯಕ್ಷ ಭೂತಯ್ಯ, ಸದಸ್ಯ ಮೋಹನ್, ಗುತ್ತಿಗೆದಾರರ ಹನುಮಂತಯ್ಯ, ಪಂಚಾಯಿತಿಅಭಿವೃದ್ದಿ ಅಧಿಕಾರಿ
ಬಾಬು ಶ್ರೀನಿವಾಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

99

© ಹುಳಿಯಾರು ಸಮಗ್ರ ಸುದ್ಧಿ . All Rights Reserved.