ಹುಳಿಯಾರು : ಸಮೀಪದ ಬೆಳಗುಲಿ ಗ್ರಾಮದಲ್ಲಿ ಈ ಬಾರಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವಾರ್ಷಿಕ ವಿಶೇಷ ಶಿಬಿರವನ್ನು ಮೇ. 10 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ.
ಮೇ. 10 ರ ಶನಿವಾರ ಶಿಬಿರ ಪ್ರಾರಂಭವಾಗಲಿದ್ದು ಶಾಸಕರಾದ ಸಿ ಬಿ ಸುರೇಶ್ ಬಾಬು ಉದ್ಘಾಟಿಸಲಿದ್ದಾರೆ, ಪ್ರತಿ ದಿನ ದ್ವಜಾರೋಹಣ, ಯೋಗ, ವ್ಯಾಯಾಮ, ಶ್ರಮದಾನ, ವಿಚಾರ ಮಂಥನ, ಸಂಜೆ ಗಣ್ಯರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ಮೇ. 11 ರ ಭಾನುವಾರ ವಿಷಯ - "ಗ್ರಾಮ ಕಲೆಗಳ ಗಾನ ವೈಭವ-ಜಾನಪದ ಕಲೆಗಳ ಅನಾವರಣ" ದ ಬಗ್ಗೆ ಎಲ್ ಹನುಮಯ್ಯ ಅಧ್ಯಾಪಕರು ಮತ್ತು ಗಾಯಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ತುಮಕೂರು ಇವರಿಂದ ಉಪನ್ಯಾಸ.
ಮೇ. 12 ರ ಸೋಮವಾರ ವಿಷಯ : "ಗುಡಿ ಕೈಗಾರಿಕೆಗಳು ಮತ್ತು ಅದರ ಪ್ರಾಮುಖ್ಯತೆ" ಯ ಬಗ್ಗೆ ಎಲ್ ಆರ್ ಚಂದ್ರಶೇಖರ್ ಕೈಗಾರಿಕೋಧ್ಯಮಿಗಳು, ಗಾಂಧಿಪೇಟೆ ಇವರಿಂದ ಉಪನ್ಯಾಸ.
ಮೇ. 13 ರ ಮಂಗಳವಾರ ವಿಷಯ - "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ ಡಾ. ರೆ.ಮ. ನಾಗಭೂಷಣ್ ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ, ಚಿ ನಾ ಹಳ್ಳಿ ಇವರಿಂದ ಉಪನ್ಯಾಸ.
ಮೇ. 14 ರ ಬುಧವಾರ ವಿಷಯ - "ಸ್ವಚ್ಚ ಗ್ರಾಮ ಸಶಕ್ತ ಗ್ರಾಮ" ದ ಬಗ್ಗೆ ಆರ್ ಎಸ್ ರಮೇಶ್ ಪಿ.ಡಿ.ಓ ಬೆಳಗುಲಿ ಪಂಚಾಯಿತಿ ಇವರಿಂದ ಉಪನ್ಯಾಸ.
ಮೇ. 15 ರ ಗುರುವಾರ ವಿಷಯ - "ಶಿಕ್ಷಣ ಮತ್ತು ಬದುಕು" ಬಗ್ಗೆ ಸಿ ಎಸ್ ಕಾಂತರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆ ಚಿ.ನಾ,ಹಳ್ಳಿ ಇವರಿಂದ ಉಪನ್ಯಾಸ.
ಮೇ. 16 ಶುಕ್ರವಾರ ಸಮಾರೋಪ ಸಮಾರಂಭದೊಂದಿಗೆ ಎನ್ ಎಸ್ ಎಸ್ ಶಿಬಿರಕ್ಕೆ ತೆರೆ ಬಿಳಲಿದೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.