ಹುಳಿಯಾರು : ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿಯವರ ವಿಮಾನ ಗೋಪುರ ಶಿಖರ ಕಳಸ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪೂಜಾ ಮಹೋತ್ಸವವು ಮೇ. 02 ನೇ ಶುಕ್ರವಾರ ನಂದಿ ಧ್ವಜಾರೋಹಣದೊಂದಿಗೆ ಆರಂಭವಾಗಿದ್ದು ಮೇ. 04 ಭಾನುವಾರದವರೆಗೆ ನಡೆಯಲಿದೆ .
ಶನಿವಾರ ಸಂಜೆ ಶ್ರೀ ಮಲ್ಲೇಶ್ವರ ಸ್ವಾಮಿ, ಕೆಂಚಮ್ಮ ದೇವಿ , ಕಾಳಿಕಾಂಬ ದೇವಿ ,ಹುಳಿಯಾರು ದುರ್ಗಾಪರಮೇಶ್ವರಿ ಹಾಗೂ ಹುಳಿಯಾರಮ್ಮ ದೇವರುಗಳ ಸಮ್ಮುಖದಲ್ಲಿ ಗಂಗಾ ಪೂಜೆ, ಗೋಪೂಜೆ, ಕಲಶ ಪೂರ್ಣ ಕುಂಭಗಳೊಂದಿಗೆ ದೇವಾಲಯ ಪ್ರವೇಶ ಮಾಡಲಾಗುವುದು. ನಂತರ ಮಹಾ ಗಣಪತಿ ಪೂಜೆ, ಏಕಾದಶ ರುದ್ರ ಕಲಶ ಪೂಜೆ ಇತ್ಯಾದಿ ಪೂಜೆಗಳು ನಡೆದು ಆನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ಮೇ 4ರ ಭಾನುವಾರ ಮಲ್ಲೇಶ್ವರ ಸ್ವಾಮಿಯ ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಬೆಳಗ್ಗೆ 7:30ಕ್ಕೆ ಪರಮಪೂಜ್ಯ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಅಮೃತ ಹಸ್ತದಿಂದ ದೇವಾಲಯದ ಶಿಖರ ಕಲಶ ಪ್ರತಿಷ್ಠಾಪನೆ ಜರುಗಲಿದೆ. ಹೋಮ ಹವನಾದಿಗಳ ನಂತರ ಕೆರೆಗೋಡಿ ರಂಗಾಪುರದ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿ ಅವರಿಂದ ಪೂರ್ಣಾಹುತಿ ಸಲ್ಲಿಸಿ ಮಹಾಮಂಗಳಾರತಿ ತದನಂತರ ಮಹಾದಾಸೋಹ ಜರುಗಲಿದೆ.
ಸರ್ವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.