ಪಡಿತರಕ್ಕಾಗಿ ಪರದಾಡದೇ ನಿಮ್ಮ ಗ್ರಾಮದಲ್ಲೇ ಪಡೆಯಿರಿ – ಶಾಸಕ ಸಿ ಬಿ ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ : ಈ ಹಿಂದೆ ಬೇವಿನಹಳ್ಳಿ ಗ್ರಾಮದಲ್ಲಿನ ಸೊಸೈಟಿಗೆ ಸುಮಾರು 3 ರಿಂದ 4 ಕಿ.ಮೀ ದೂರ ಪ್ರಯಾಣ ಮಾಡಿ ಪಡಿತರವನ್ನು ಪಡೆಯಬೇಕಾಗಿತ್ತು ಅದರೆ ಅದನ್ನು ತಪ್ಪಿಸಲು ಇಂದು ಉಪ್ಪಾರಹಳ್ಳಿಯಲ್ಲೇ ಪಡಿತರ ವಿತರಣಾ ಉಪಕೇಂದ್ರವನ್ನು ಪ್ರಾರಂಭಮಾಡಿದ್ದು ಅದನ್ನು ಬಳಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.

ತಾಲ್ಲೂಕಿನ ಹಂದನಕೆರೆ ಹೋಬಳಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ನೂತನ ಪಡಿತರ ವಿತರಣಾ ಉಪಕೇಂದ್ರವನ್ನುಉದ್ಘಾಟಿಸಿ ಮಾತನಾಡಿದ ಅವರು ಉಪ್ಪಾರಹಳ್ಳಿ ಗ್ರಾಮದವರು ಸುಮಾರು ಮೂರುನಾಲ್ಕು ಕೀಲೋಮೀಟರ್ ದೂರದ ಬೇವಿನಹಳ್ಳಿ ಗ್ರಾಮದ ಸೊಸೈಟಿಗೆ ಪಡಿತರಕ್ಕಾಗಿ ಹೋಗಿ ಬರಬೇಕಿತ್ತು ಇದೇ ಗ್ರಾಮದಲ್ಲಿ ಸುಮಾರು 195 ಪಡಿತರ ಚೀಟಿಗಳಿದ್ದು ಇವರಿಗೆ ಅನುಕೂಲವಾಗಲೇಂದು ಈ ಗ್ರಾಮದಲ್ಲೇ ಪಡಿತರ ವಿತರಣಾ ಉಪಕೇಂದ್ರವನ್ನು ಪ್ರಾರಂಭಿಸಿದ್ದು ನಿಮಗೆ ಹಂಚಿಕೆಯಾದ ಪಡಿತರವನ್ನು ಪಡೆಯುವ ಮೂಲಕ ನಿಮ್ಮಅಕ್ಕಿ ರಾಗಿ ಪಡಿತರ ಗಳನ್ನು ಪಡೆದುಕೊಳ್ಳಿ ಎಂದ ಅವರು ಇದನ್ನು ಪಡಿತರ ಚೀಟಿದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮಾತನಾಡಿ ಬಿಸಿಲು ಮಳೆ ಎನ್ನದೇ ಪಡಿತರವನ್ನು ಪಡೆಯಲು ಜನರು ಪರದಾಡುತ್ತಿದ್ದರು ಇದನ್ನು ತಪ್ಪಿಸಲು ಶಾಸಕರು ಅಹಾರ ಇಲಾಖೆಅಧಿಕಾರಿಗಳಿಗೆ ಸೂಚನೆ ನೀಡಿ ಈ ಕೇಂದ್ರವನ್ನು ಉದ್ಘಾಟಿಸಿದ್ದಾರೆ ಇದೇ ರೀತಿ ತಾಲ್ಲೂಕಿನಲ್ಲಿ ಯಾವ ಯಾವ ಭಾಗದಲ್ಲಿ ಪಡಿತರ ಪಡೆಯಲು ದೂರದೂರಿಗೆ ಹೋಗ ಬೇಕೊ ಅಲ್ಲಿ ಒಂದೊಂದು ಉಪಕೇಂದ್ರವನ್ನು ಪ್ರಾರಂಭ ಮಾಡಬೇಕು ಕಾರಣ ನಮ್ಮ ತಾಲ್ಲೂಕಿನ ಜನರು ಪಡಿತರ ಚೀಟಿಯ ಅಕ್ಕಿಯನ್ನೇ ನಂಬಿ ಬದುಕುತ್ತಿದ್ದಾರೆ ಅದನ್ನಾದರು ಸಮರ್ಪಕವಾಗಿ ತಲುಪುವಂತೆ ಮಾಡಬೇಕಿದೆ ಇದರತ್ತ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಮಾಜಿ ತಾ.ಪಂ.ಅದ್ಯಕ್ಷೆ ಚೇತನಾಗಂಗಾಧರ್, ಪಿಡಿಒ ಗೌರಮ್ಮ ಹಾಗೂ ಬೇವಿನಹಳ್ಳಿ ಸೊಸೈಟಿಯ ಮಂಜುನಾಥ್ ಸೇರಿದಂತೆ ಇತರರು ಇದ್ದರು.

88

© ಹುಳಿಯಾರು ಸಮಗ್ರ ಸುದ್ಧಿ . All Rights Reserved.