ಚಿಕ್ಕನಾಯಕನಹಳ್ಳಿ: ಪ್ರತಿ ಗ್ರಾಮಕ್ಕೆ ರಸ್ತೆಗಳು ಮನುಷ್ಯನಿಗೆ ರಕ್ತ ನಾಡಿಗಳಿದ್ದಂತೆ ಉತ್ತಮ ರಸ್ತೆಗಳು ಗ್ರಾಮದ ಅಭಿವೃದ್ದಿಯನ್ನು ತಿಳಿಸುತ್ತವೆ ಅದ್ದರಿಂದ ಗುಣಮಟ್ಟದ ರಸ್ತೆಗಳನ್ನು ಮಾಡುವಂತೆ ಹಾಗೂ ಗುಣಮಟ್ಟದಲ್ಲಿರದಿದ್ದರೆ ಗುತ್ತಿಗೆದಾರರೇ ನೆರಹೊಣೆಗಾರರು ಆದ್ದರಿಂದ ಈ ಬಾಗದ ಜನರು ಕಾಮಗಾರಿಯತ್ತ ನಿಗಾವಹಿಸಬೇಕೆಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ ಸೋಮವಾರ 6 ಕೋಟಿವೆಚ್ಚದ 9.23ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆನೆರೆವೆರಿಸಿ ಮಾತನಾಡಿದ ಅವರು ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಈ ಭಾಗದ ಜನರ ಬೇಡಿಕೆಯಂತೆ ಒಟ್ಟು 6 ಕೋಟಿ ವೆಚ್ಚದಲ್ಲಿ 9.23ಕಿ.ಮೀ. ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದು ಇದು ರಾಮಘಟ್ಟ, ಹಂದನಕೆರೆ, ಕಾನ್ಕೆರೆ, ಬಂದ್ರೇಹಳ್ಳಿ ಗ್ರಾಮಗಳ ಮೂಲಕ ಹಾದು ಹೋಗುತ್ತದೆ ಈ ಭಾಗದ ಜನರಿಗೆ ಉತ್ತಮ ರಸ್ತೆಯಿಂದ ಅನುಕೂಲವಾಗಲಿದ್ದು ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನರು ಜಾಗೃತವಾಗಿ ಗಮನಹರಿಸಿ ಇದರೊಂದಿಗೆ ಗುತ್ತಿಗೆದಾರರು ಗುಣಮಟ್ಟವನ್ನು ನೋಡಿಕೊಂಡು ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕೆಂದರು. ರಾಷ್ಟ್ರೀಯ ಹೆದ್ದಾರಿ ಎಇಇ ಉಜ್ಜನ ಕೊಪ್ಪ ಜಿ.ಬಿ. ಮಾತನಾಡಿ ಕೇಂದ್ರ ರಸ್ತೆನಿಧಿಯಿಂದ ಈ ಕಾಮಗಾರಿಯನ್ನು ಮಾಡಲಾಗುತ್ತಿದ್ದ ಈ ಕಾಮಗಾರಿಯಲ್ಲಿ ಹಳೆಯ ರಸ್ತೆಯನ್ನ ಕಿತ್ತು ಹಾಕಿ ನಂತರ ಅದರ ಮೇಲ್ಪದರವನ್ನು ಗಟ್ಟಿಗೊಳಿಸುವುದು, ಜಲ್ಲಿಯೊಂದಿ ನಿರ್ಮಿಸುವುದು, ಡಾಂಬರಿಕರಣ ಹಾಗೂ ಹಾಗೂ ಕೆರೆಯ ಭಾಗದಲ್ಲಿ ಹುಕ್ಕಿನ ತಡೆಯನ್ನು ಮಾಡುವ ಮೂಲಕ ಈ ಭಾಗದ ಜನರಿಗೆ ಈ ರಸ್ತೆಯನ್ನುಗುಣಮಟ್ಟದಲ್ಲಿ ನಿರ್ಮಿಸಿ ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪಿಎಲ್ ಡಿಬ್ಯಾಂಕ್ ನಿರ್ದೇಶಕ ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಹಂದನಕೆರೆ ಮಾಜಿ ಅಧ್ಯಕ್ಷ ಶಿವಮ್ಮ ರಮೇಶ್, ಸದಸ್ಯ ಬಸವಲಿಂಗಯ್ಯ, ಮಾಜಿ ಉಪಾದ್ಯಕ್ಷೆ ಚಂದ್ರಕಲಾ ರಂಗನಾಥ್ , ಹಂದನಕೆರೆ ಹೋಬಳಿ ಕಸಾಪ ಅಧ್ಯಕ್ಷ ಅನಂತಯ್ಯ ಹಾಗೂ ಇತರರು ಇದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.