ವಿಶ್ವ ಡೆಂಗ್ಯೂ ದಿನ – ಪೌರಕಾರ್ಮಿಕರಿಗೆ ಆರೋಗ್ಯ ಮಾಹಿತಿ

ಚಿಕ್ಕನಾಯಕನಹಳ್ಳಿ : ಪೌರಕಾರ್ಮಿಕರಿಗೆ ವಿಶ್ವ ಡೆಂಗ್ಯೂ ದಿನದ ಪ್ರಯುಕ್ತ ಡೆಂಗ್ಯೂ ರೋಗದ ಬಗ್ಗೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ರೋಗ ನಿಯಂತ್ರಣದಲ್ಲಿ ಪೌರಕಾರ್ಮಿಕರು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಸಮುದಾಯದ ಸಹಭಾಗಿತ್ವ ಸೊಳ್ಳೆಗಳ ಉತ್ಪತ್ತಿ ತಾಣಗಳ ಗುರುತಿಸುವಿಕೆ ಸ್ವಚ್ಛ ಗೊಳಿಸುವುದು ನೀರಿನ ಸಂಗ್ರಹ ತಾಣಗಳನ್ನು ಮುಚ್ಚಿಡಲು ಸಾರ್ವಜನಿಕರಿಗೆ ಮಾಹಿತಿ ನೀಡುವುದು. ತ್ಯಾಜ್ಯ ವಸ್ತುಗಳ ವಿಲೇವಾರಿ ವಾಹನದಲ್ಲಿ ಡೆಂಗ್ಯೂ ರೋಗದ ಬಗ್ಗೆ ಮುಂಜಾಗ್ರತ ಕ್ರಮಗಳ ಬಗ್ಗೆ ಪ್ರಚಾರ ಮಾಡುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಲಾಯಿತು.
ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವೈಧ್ಯರಾದ ಭರತ್ ಡೆಂಗ್ಯೂ ರೋಗದ ಬಗ್ಗೆ ಪರೀಕ್ಷೆ ಹಾಗೂ ಚಿಕಿತ್ಸೆಗಳ ಬಗ್ಗೆ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ವೆಂಕಟರಾಮಯ್ಯ ವಿಶ್ವ ಡೆಂಗ್ಯೂ ದಿನದ ಘೋಷಣೆ ಪರಿಶೀಲಿಸಿ ಸ್ವಚ್ಛಗೊಳಿಸಿ ಮುಚ್ಚಿಡಿ ಎಂಬುದರ ಮಹತ್ವದ ಬಗ್ಗೆ ವಾರದ ಒಣಗಲು ದಿನ ನೀರಿನ ಸಂಗ್ರಹ ತಾಣಗಳನ್ನು ಭದ್ರವಾದ ಮುಚ್ಚಳ ಹಾಕಿ ಮುಚ್ಚುವುದರ ಬಗ್ಗೆ. ಪರಿಸರ ನೈರ್ಮಲ್ಯ ಕಾಪಾಡುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು
ಜಿಲ್ಲಾ ಮಟ್ಟದ ಮೇಲ್ವಿಚಾರಕರಾದ ಮಂಜೇಗೌಡ ಮಾತನಾಡಿ ಸೊಳ್ಳೆಗಳ ಉತ್ಪತ್ತಿ ಮತ್ತು ಅವುಗಳನ್ನು ನಾಶಪಡಿಸುವ ಬಗ್ಗೆ. ಬೆಂಗಳೂರು ಹೋಗೋ ಒಬ್ಬರಿಂದ ಒಬ್ಬರಿಗೆ ಹರಡುವ ವಿಧಾನಗಳ ಬಗ್ಗೆ ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮುದ್ದೇಗೌಡ ಡೇಂಗ್ಯೂ ರೋಗ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿ ಕರಪತ್ರಗಳನ್ನು ವಿತರಿಸಿದರು

115

© ಹುಳಿಯಾರು ಸಮಗ್ರ ಸುದ್ಧಿ . All Rights Reserved.