ಹುಳಿಯಾರು :-ತಾಲ್ಲೂಕಿನ ಜನರಿಗಾಗಿ ಪಟ್ಟಣದಲ್ಲಿ ಪ್ರತಿ ಸೋಮವಾರ 68 ವಾರಗಳಿಂದ ಜನಸ್ಪಂದನಾ ಸಭೆಯನ್ನು ಹಾಗೂ ಬುಕ್ಜಾಪಟ್ಟಣ ಹೋಬಳಿ ನಮ್ಮ ಕ್ಷೇತ್ರಕ್ಕೆ ಸೇರಿದ್ದು ಶಿರಾದಲ್ಲೂ 15 ದಿನಗಳಿಗೊಮ್ಮೆ 31 ಜನಸ್ಪಂದನಾ ಕಾರ್ಯಕ್ರಮವನ್ನು ಮಾಡಿದ್ದೇವೆ ಇದರೊಂದಿಗೆ ಪ್ರತಿಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸದರು.
ತಾಲ್ಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಯಾವುದೇ ಮದ್ಯವರ್ತಿಗಳ ಹಾವಳಿ ಇಲ್ಲದೇ ಲಂಚದ ಆಮಿಷಕ್ಕೆ ಒಳಗಾಗದೇ ನೇರವಾಗಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ ಯಾವುದೇ ಇಲಾಖೆಗೆ ಸಂಬಂದಿಸಿದ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ನೀಡಿ ನಿಮ್ಮಅರ್ಜಿಯಲ್ಲಿ ಸರಿಯಾದ ದಾಖಲೆ ಸಮೇತ ನೀಡಿ ನಿಮ್ಮೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಬಗೆ ಹರಿಸುತ್ತಾರೆ ನೇರವಾಗಿ ಜನರ ನಡುವೆ ಬಂದಿದ್ದೇನೆ ಯಾವುದೇ ಸಮಸ್ಯೆಗಳಿರಲಿ ಸಾಮೂಹಿಕವಾಗಲಿ ನಿಮ್ಮ ವೈಯಕ್ತಿಕ ಸಮಸ್ಯೆಗಳಾಗಲಿ ತಿಳಿಸಿ ಯಾವುದೇ ನಿಮ್ಮ ಯಾವುದೇ ಮಾಸಶನ ಪಡೆಯಲು ಅರ್ಜಿ ನೀಡಿದರ ನೀವು ಅರ್ಹರಿದ್ದರೆ ಮುಂದಿನ ಒಂದು ವಾರದಲ್ಲೇ ಅದು ಮಂಜೂರಾಗುತ್ತದೆ ಎಂದ ಅವರು ನಿವು ಅರ್ಜಿಗಳನ್ನು ನೀಡಲು ತಾಲ್ಲೂಕು ಕಚೇರಿಗಳಿಗೆ ಬಂದಾಗ ಅಲ್ಲಿ ನಿಮಗೆ ಸ್ಪಂದನೆ ಸಿಗದೇ ಇರಬಹುದು ಇದಕ್ಕಾಗಿ ನಿಮ್ಮ ಮನೆಬಾಗಿಲಿಗೆಅಧಿಕಾರಿಗಳು ಶಾಸಕರು ಎಲ್ಲಾ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು.
ರಾತ್ರಿ 9ಗಂಟೆಯವರೆಗೂ ನಡೆದ ಕಾರ್ಯಕ್ರಮ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹೊಯ್ಸಳಕಟ್ಟೆ ಗ್ರಾಮಪಂಚಾಯಿತಿಯ ಬೋರನಕಣಿವೆ, ಲಕ್ಕೇನಹಳ್ಳಿ ಬೆಳ್ಳಾರಕೆಳಗಲಗೊಲ್ಲರಹಟ್ಟಿ, ಬೆಳ್ಳಾರ, ಅಂಬಾರಪುರ, ನೂಲೇನೂರು, ಕಲ್ಲೇನಹಳ್ಳಿ, ಹೊಯ್ಸಳಕಟ್ಟೆ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಪಡೆದು ಕೇಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಯ್ಸಳಕಟ್ಟೆ ಗ್ರಾ.ಪಂ.ಅಧ್ಯಕ್ಷೆರಾಧರಾಜು, ಉಪಾದ್ಯಕ್ಷ ಲಕ್ಷ್ಮೀಕಾಂತ, ಸದಸ್ಯರುಗಳಾದ ಗಿರೀಶ್, ರಘುವೀರ್, ಮಂಜುನಾಥ್, ಇಒ ದೊಡ್ಡಸಿದ್ದಯ್ಯ, ಬಿಇಒ ಕಾಂತರಾಜು, ಪಿ ಎಲ್ ಡಿ ಬ್ಯಾಂಕ್ ಉಪಾದ್ಯಕ್ಷ ದಬ್ಬಗುಂಟೆ ರವಿಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.