ಹುಳಿಯಾರು : ತೋಟದ ಮನೆಗೆ ಬಂದ ನಾಗರಹಾವನ್ನು ವೃದ್ದೆಯೊಬ್ಬಳು ಬರಿಗೈನಲ್ಲಿ ಬಡಿದು ಹೆಗಲ ಮೇಲೆ ಹಾಕಿಕೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗುಲಿ ಗ್ರಾಮದಲ್ಲಿ ನಡೆದಿದೆ
ಮನೆಯಲ್ಲಿ ಕಾಣಿಸಿ ಕೊಂಡ ನಾಗರಹಾವನ್ನು ಹೊಡೆಯಲು ಗ್ರಾಮಸ್ಥರು ದೊಣ್ಣೆ ಹುಡುಕುತ್ತಿದ್ದಾಗ ಹಾವಿಗೆ ಯಮಸ್ಚರೂಪಿಯಾಗಿ ಸೀದಾ ಎಂಟ್ರಿ ಕೊಟ್ಟ ವೃದ್ದೆ ಹಾವನ್ನ ಹಿಡಿದು ಹೆಗಲ ಮೇಲೆ ಹಾಕಿಕೊಂಡು ಹೊರತಂದು ಬಳಿಕ ಅಲ್ಲೇ ಪಕ್ಕದಲ್ಲಿದ್ದ ತೆಂಗಿನಮರಕ್ಕೆ ಹಾವನ್ನ ಸೆಣೆದು ಸಾಯಿಸಿದ್ದಾಳೆ.
ವೃದ್ದೆ ಅವಳಗೆರೆ ಗ್ರಾಮದ ಗಂಗಜ್ಜಿ ಎಂದು ತಿಳಿದು ಬಂದಿದ್ದು, ಇಂತಹ ಅನೇಕ ಹಾವುಗಳನ್ನು ಹಿಡಿದಿದ್ದಾರೆ ಎನ್ನಲಾಗಿದೆ ವೃದ್ದೆಯ ಧೈರ್ಯ ಕಂಡು ಒಂದು ಕ್ಷಣ ಗ್ರಾಮಸ್ಥರು ಶಾಕ್ ಆಗಿದ್ದು. ವಿಷಕಾರಿ ಹಾವಿನಿಂದ ಕುಟುಂಬ ರಕ್ಷಣೆ ಮಾಡಿದ ವೃದ್ದೆಯ ಸಾಹಸ ಕಂಡು ದಂಗಾಗಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.