ಹುಳಿಯಾರು : ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಚಿತ್ರಕಲಾ ಸ್ಪರ್ದೆ ಏರ್ಪಡಿಸಲಾಗಿತ್ತು, ಹಾಗೂ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಭಾಷಣ ಮಾಡಿದರು.
ವಿದ್ಯಾರ್ಥಿನಿ ೮ನೇ ತರಗತಿ ಗಂಗಮ್ಮ ಮಾತನಾಡಿ ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನವನ್ನಾಗಿ ಜೂನ್ ೫ನೇ ತಾರೀಖು ಆಚರಿಸಲಾಗುತ್ತಿದೆ, ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಪ್ರತಿಯೊಂದು ಭೂಮಿಯ ಮೇಲಿನ ಜೀವಿಗಳ ಅಸ್ಥಿತ್ವಕ್ಕೆ ಕಾರಣವಾಗಿದೆ. ಮನುಷ್ಯನು ಸೇರಿದಂತೆ ಪ್ರಾಣಿ ಪಕ್ಷಿಗಳು ಪರಿಸರವನ್ನು ಅವಲಂಭಿಸಿವೆ ಎಂದರೆ ತಪ್ಪಾಗಲಾರದು, ಮಾನವ ಆಧುನಿಕತೆಯ ದುರಾಸೆಗೆ ಬಿದ್ದು ಪರಿಸರವನ್ನು ಹಾಳುಮಾಡುತ್ತಿದ್ದಾನೆ, ನಾವು ಉಳಿಯಬೇಕೆಂದರೆ ಪರಿಸರ ಉಳಿಯಲೇಬೇಕು ಆದ್ದರಿಂದ ಪರಿಸರವನ್ನು ಕಾಪಾಡುವುದು ನಮ್ಮೇಲ್ಲರ ಹೊಣೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಚಿತ್ರಕಲಾ ಮತ್ತು ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಈ ಸಂಧರ್ಭದಲ್ಲಿ ಮುಖ್ಯಶಿಕ್ಷಕ ಮಂಜುನಾಥ್ , ಸಹಶಿಕ್ಷಕರಾದ ಶಾಂತರಾಜು, ಪ್ರಸಾದ್ ಕೆ, ಕವಿತಾ, ಮಂಜುಳ, ರೇಣುಕಾ ಸ್ವಾಮಿ, ದೇವರಾಜು, ಚಂದ್ರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.