ಕೆನರಾ ಬ್ಯಾಂಕಿನಲ್ಲಿ ಕೆನರಾ ಏಂಜಲ್ ಉಳಿತಾಯ ಖಾತೆ ಇರುವವರಿಗೆ ರೂ 10 ಲಕ್ಷದವರೆಗೆ ಕ್ಯಾನ್ಸರ್ ಟ್ರೀಟ್ಮೆಂಟ್ ಉಚಿತ - ಶ್ರೀ ವಿನಯ್, ಕೆನರಾ ಬ್ಯಾಂಕ್ ಮ್ಯಾನೇಜರ್

ಹುಳಿಯಾರು : ಕೆನರಾ ಬ್ಯಾಂಕಿನಲ್ಲಿ ಕೆನರಾ ಎಂಜಲ್ ಖಾತೆ ಹೊಂದಿರುವರು ಅವರ ಸ್ವಂತ ಕ್ಯಾನ್ಸರ್ ಚಿಕಿತ್ಸೆಗಾಗಿ 10 ಲಕ್ಷ ರೂಪಾಯಿ ವರೆಗೆ ಕ್ಯಾನ್ಸರ್ ಚಿಕಿತ್ಸೆಗೆ ಹಣ ನೀಡಲಾಗುವುದು ಎಂದು ಹುಳಿಯಾರು ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ವಿನಯ್ ತಿಳಿಸಿದರು.

ಅವರು ಇತ್ತೀಚೆಗೆ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ, ಹಾಗೂ ಕೆನರಾ ಬ್ಯಾಂಕ್ ಹುಳಿಯಾರು, ಓಂಕಾರ ಸಂಜೀವಿನಿ ಒಕ್ಕೂಟ ಕೆಂಕೆರೆ ಗ್ರಾಮ ಪಂಚಾಯಿತಿವತಿಯಿಂದ ಜಂಟಿಯಾಗಿ ಕೆಂಕೆರೆ ಗ್ರಾಮದ ಸಂಜೀವಿನಿ ಒಕ್ಕೂಟದ ಆವರಣದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡುತ್ತಾ ಈ ಕೆನರಾ ಎಂಜಲ್ ಖಾತೆ ಹೊಂದಿರುವವರು ಆಕಸ್ಮಿಕ ಮರಣವಾದಲ್ಲಿ ರೂ 26 ಲಕ್ಷದ ವರೆಗೆ ವಿಮಾ ಸೌಲಭ್ಯ ದೊರೆಯುತ್ತದೆ ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳ ಬಗ್ಗೆ ವಿವರಣೆ ನೀಡಿದರಲ್ಲದೆ ಸೈಬರ್ ಕಳ್ಳರು ಉಳಿತಾಯ ಖಾತೆಯಿಂದ ಹಣ ಕದಿಯದಂತೆ ತಾವು ಬಹಳ ಜಾಗೃತರಾಗಿ ಇರಬೇಕೆಂದು ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಎನ್ಆರ್ಎಲ್ಎಂಸಿ ಇಒ ಷಡಕ್ಷರಿಯವರು ಸಂಜೀವಿನಿ ಒಕ್ಕೂಟದ ಸಂಘಗಳಿಂದ ದೊರೆಯುವ ಎಂಎಸ್ಎಂಇ ಸಾಲಗಳ ಬಗ್ಗೆ ವಿವರಣೆ ನೀಡಿದರು.
ಜಲಾನಯನ ಘಟಕದ ಅಧಿಕಾರಿಗಳಾದ ದೇವರಾಜು ಹಾಗೂ ಜ್ಯೋತಿ ನೀರಿನ ಉಳಿತಾಯದ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿದರು.
ಈ ಜನ ಸುರಕ್ಷಾ ಶಿಬಿರದಲ್ಲಿ ಓಂಕಾರ ಸಂಜೀವಿನಿ ಒಕ್ಕೂಟದ ಎಂಬಿಕೆ ಗಾಯಿತ್ರಿ ,ಅಧ್ಯಕ್ಷರಾದ ಗಿರಿಜಮ್ಮ, ಎಲ್ಸಿಆರ್ಪಿ ಲಕ್ಷ್ಮಿದೇವಿ ,ಕೃಷಿಸಖಿ ಶಶಿಕಲಾ, ಚಂದ್ರಕಲಾ, ಹಾಗೂ ಪದಾಧಿಕಾರಿಗಳು ಕೆನರಾ ಬ್ಯಾಂಕಿನ ಬಿಸಿ ರಾಮಾಚಾರ್ಯ, ರೈತ ಮಹಿಳೆಯರು, ಸ್ವಸಾಯ ಸಂಘದ ಸದಸ್ಯರ ಇನ್ನು ಮುಂತಾದವರು ಉಪಸ್ಥಿತರಿದ್ದರು

150

© ಹುಳಿಯಾರು ಸಮಗ್ರ ಸುದ್ಧಿ . All Rights Reserved.