ಚಿ.ನಾ. ಹಳ್ಳಿ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು 73:48% ಪಡೆದು ಸತತ ಎರಡನೇ ಬಾರಿ ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
ತುಮಕೂರು ಮತ್ತು ಮದುಗಿರಿ ಎರಡು ಶೈಕ್ಷಣಿಕ ಜಿಲ್ಲೆಗಳು ಸೇರಿ ಹತ್ತು ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ ಪ್ರಥಮವಾಗಿರುವುದು ಹಾಗೂ ಅದಕ್ಕೆ ಕಾರಣಿಭೂತರಾಗಿರುವ ಶಿಕ್ಷಕರ ಪಡೆಗೆ ಹೃದಯಪೂರ್ವಕ ಶುಭಾಶಯಗಳು. ಶ್ರಮವಹಿಸಿ ಓದಿ ಫಲಿತಾಂಶ ತಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರುಗಳಿಗೆ ಚಿಕ್ಕನಾಯಕನಹಳ್ಳಿಯ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳು.
ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ ಎಸ್ ಕಾಂತರಾಜು ಮತ್ತು ಅವರ ತಜ್ಞರ ತಂಡ ಹಾಗೂ ಅವರ ನೆಚ್ಚಿನ ಶಿಕ್ಷಕ ವರ್ಗ ತಮ್ಮ ಬದ್ಧತೆಯನ್ನು ಮೆರೆದಿದೆ. ಅವರ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆತಿದೆ. ಅವರ ವೃತ್ತಿಪರತೆ, ಕಾರ್ಯ ತತ್ಪರತೆ ಹಾಗೂ ಸಾಧನೆಗೆ ಶಾಸಕರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಸಿ ಬಿ ಸುರೇಶ್ ಬಾಬು ಅಭಿನಂದನೆಗಳನ್ನು ತಿಳಿಸಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.