ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ

ಚಿಕ್ಕನಾಯಕನಹಳ್ಳಿ : ತಾಲೂಕಿನ ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಇವರ ಸಹಯೋಗದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ನಟರಾಜ್ ರಕ್ತದೊತ್ತಡ ತಪಾಸಣೆ, ರಕ್ತ ಪರೀಕ್ಷೆ ಮತ್ತು ಚಿಕಿತ್ಸೆಗಳ ಬಗ್ಗೆ, ಸಮತೋಲನ ಆಹಾರದ ಬಗ್ಗೆ, ದುಶ್ಚಟಗಳಿಂದ ದೂರವಿರುವ ಬಗ್ಗೆ ತಿಳಿಸಿದರು

ಹಿರಿಯ ತಜ್ಞ ಡಾ. ಚೇತನ್ ಮಾನಸಿಕ ಆರೋಗ್ಯ ಕಾಪಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ. ಅಧಿಕ ರಕ್ತದೊತ್ತಡ ನಮ್ಮಲ್ಲೇ ಉತ್ಪತ್ತಿಯಾಗುವ ಅಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿಡಲು ಮಾಡಬೇಕಾದ ಚಟುವಟಿಕೆಗಳು ಧ್ಯಾನ, ಯೋಗ, ವ್ಯಾಯಾಮ ಮುಂತಾದವುಗಳ ಬಗ್ಗೆ ತಿಳಿಸಿಕೊಟ್ಟರು.

ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಯಶವಂತ್ ಮಾತನಾಡಿ ಗೃಹ ಆರೋಗ್ಯ. ಎನ್ ಸಿ ಡಿ ವಿಭಾಗದ ಚಟುವಟಿಕೆಗಳು ಕಾರ್ಯಕ್ಷೇತ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಹಾಗೂ ಡಾ. ಕವಿತಾ ಗರ್ಭಿಣಿ ಸ್ತ್ರೀಯರ ನಿರ್ದಿಷ್ಟವಾಗಿ ಮಾಡಬೇಕಾದ ತಪಾಸಣೆಗಳು ಹಾಗೂ ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ಬಳಸಬಾರದೆಂಬ ಸಲಹೆಗಳ ಬಗ್ಗೆ ತಿಳಿಸಿದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಕೃಷ್ಣೆಗೌಡ ಸಾರ್ವಜನಿಕರಿಗೆ ಆಸ್ಪತ್ರೆಯಿಂದ ದೊರೆಯುವ ಸೌವಲತ್ತುಗಳ ಬಗ್ಗೆ. ಅದರ ಉಪಯೋಗ ಸಾರ್ವಜನಿಕರಿಗೆ ಆಗುವುದು. ಎಂದು ತಿಳಿಸಿದರು. ಜಾಕಿರ್ ಹುಸೇನ್ ಸಾರ್ವಜನಿಕರು ವೈದ್ಯರ ಸಲಹೆಗಳನ್ನು ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಕೀರ್ತಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ಗಳ ಬಗ್ಗೆ ಅದರ ಉಪಯೋಗದ ಬಗ್ಗೆ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ವಿ ವೆಂಕಟರಾಮಯ್ಯ ಸ್ವಾಗತ ಮತ್ತು ನಿರೂಪಣೆ ಮಾಡಿದರು. ಆಪ್ತ ಸಮಾಲೋಚಕರಾದ ಬಾಲಕೃಷ್ಣ ವಂದನಾರ್ಪಣೆ ಮಾಡಿದರು.

ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಪರೀಕ್ಷಿಸಿ. ನಿಯಂತ್ರಿಸಿ. ಹೆಚ್ಚು ಕಾಲ ಬದುಕ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

88

© ಹುಳಿಯಾರು ಸಮಗ್ರ ಸುದ್ಧಿ . All Rights Reserved.