ಜ್ಞಾನಜ್ಯೋತಿ ಶಾಲೆಗೆ ಶೇ. 96 ಫಲಿತಾಂಶ

ಹುಳಿಯಾರು : ಪಟ್ಟಣದ ವಿಜಯನಗರದ ಜ್ಞಾನಜ್ಯೋತಿ ಆಂಗ್ಲ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇಕಡಾ 96 ಬಂದಿದೆ.
ಪರೀಕ್ಷೆ ಬರೆದ 27 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 12, ಪ್ರಥಮ ಶ್ರೇಣಿ 13, ದ್ವಿತೀಯ ಶ್ರೇಣಿಯಲ್ಲಿ 1 ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ.
ದಿಗಂತ್ ಡಿ – 607, ರೂಪಾಶ್ರೀ ಎಂ – 590, ತ್ರಿಷಾ ಜಾಸ್ಮಿನ್ ಆರ್ – 588, ಇಂಚರ ಬಿ – 586, ರೋಹಿಣಿ ಎಂ – 577, ವರದರಾಜು ವಿ – 577, ಸಂತೋಷ್ ಪಿ – 575, ಗುರುಪ್ರಸಾದ್ ಎಸ್ – 574, ಉಷಾ ಬಿ ಎಸ್ – 570, ಯಶಸ್ವಿನಿ – 551, ಶ್ರಾವ್ಯ – 547, ದಿವ್ಯಶ್ರೀ – 537 ಅತಿ ಹೆಚ್ಚು ಅಂಕ ಪಡೆದವರಾಗಿದ್ದಾರೆ.
ನಮ್ಮ ಶಾಲೆಯಲ್ಲಿ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದುತ್ತಿದ್ದು ಫಲಿತಾಂಶ ತೃಪ್ತಿ ತಂದಿದೆ ಎಂದು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸುಧಾ ಎಸ್ , ಅಧ್ಯಕ್ಷರಾದ ಕೆ.ಸಿ. ಶಿವಣ್ಣ, ಮುಖ್ಯ ಶಿಕ್ಷಕ ಕೆ ಎಲ್ ಗಿರೀಶ್, ಹಾಗೂ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

169

© ಹುಳಿಯಾರು ಸಮಗ್ರ ಸುದ್ಧಿ . All Rights Reserved.