ಹುಳಿಯಾರಿನ ಲಿಂಗಪ್ಪನ ಪಾಳ್ಯ ಕೋಡಿಪಾಳ್ಯಕ್ಕೆ ಸೇರಿದ ಹುಳಿಯಾರು ಕೆರೆ ಏರಿ ಬಳಿಯಿರುವ ಅಂತರಗಟ್ಟೆ ಶ್ರೀ ದುರ್ಗಾಂಬ ದೇವಿ ದೇವಾಲಯದ ಉದ್ಘಾಟನಾ ಸಮಾರಂಭ ಇಂದಿನಿಂದ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಇಂದು ಮೇ 29ರ ಗುರುವಾರ ಸಂಜೆ 6:00 ಗಂಟೆಯಿಂದ ಗಂಗಾ ಪೂಜೆ, ಪುಣ್ಯಾಹ, ಮಹಾಗಣಪತಿ ಪೂಜೆ, ಕಳಸರಾಧನೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ ನಡೆಯಲಿದೆ.
30ರ ಶುಕ್ರವಾರ ಬೆಳಗ್ಗೆ 6:30ಕ್ಕೆ ಹುಳಿಯಾರು ಗ್ರಾಮ ದೇವತೆಗಳಾದ ಹುಳಿಯಾರಮ್ಮನವರು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು, ಕೆಂಚಮ್ಮ ದೇವಿ, ಲಿಂಗಪ್ಪನ ಪಾಳ್ಯದ ರಾಮದೇವರು ಹಾಗೂ ಕೋಡಿಪಾಳ್ಯದ ಮೈಲಾರಲಿಂಗೇಶ್ವರ ದೇವರುಗಳ ಆಗಮನವಾಗಲಿದೆ. ನಂತರ ಹವನ ಹೋಮಾದಿಗಳು ಜರುಗಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ.
ಮಧ್ಯಾಹ್ನ 12:30 ರಿಂದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನ ಸಮಿತಿಯವರು ಕೋರಿದ್ದಾರೆ.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.