ಮೊದಲು ಭೂಸ್ವಾದೀನ ಪ್ರಕ್ರಿಯೆ ಮುಗಿಸಿದ್ದರೆ ಹೇಮಾವತಿ ನಾಲಾ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರಲಿಲ್ಲ – ಶಾಸಕ ಸಿ.ಬಿ. ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ : ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ತಾಲ್ಲೂಕಿನ 26ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಯಲ್ಲಿ ಈಗಾಗಲೇ 4 ಕೆರೆಗಳಿಗೆ ಏತನೀರಾವರಿಯ ಮೂಲಕ ಹಾಗೂ 4 ಕೆರೆಗಳಿಗೆ ಗುರುತ್ವಾಕರ್ಷಣೆಯ ಮೂಲಕ 4 ಕೆರೆಗಳಿಗೆ ನೀರು ಕಳೆದ ನಾಲ್ಕು ವರ್ಷಗಳಿಂದ ಹರಿಯುತ್ತಿದೆ ಇನ್ನು ಉಳಿದ ಭಾಗದ ಕಾಮಗಾರಿಗೆ ಸರಿಯಾಗಿ ಭೂಸ್ವಾಧೀನ ಪ್ರಕ್ರಿಯೆ ಮಾಡಿದರದ ಕಾರಣ ಇಷ್ಟು ವರ್ಷಗಳು ಬೇಕಾಗಿದೆ ಅಂದರೆ ಹಾಲ್ಕುರಿಕೆ ನಾಲೆಯ ಭಾಗಕ್ಕೆ ಅಗತ್ಯವಿದ್ದಂತಹ 79 ಎಕರೆ ಭೂಸ್ವಾದೀನಕ್ಕೆ 32 ಎಕರೆ ಅವಾರ್ಡ್ ಆಗಿದೆ ಇನ್ನು ಉಳಿದ 43 ಎಕರೆಗೆ ಹಾಗೂ ಚಿಕ್ಕನಾಯಕನಹಳ್ಳಿ ಶಾಖಾ ನಾಲೆಯ ಭಾಗಕ್ಕೆ 168 ಎಕರೆ ಭೂಸ್ವಾದೀನಕ್ಕೆ 93 ಎಕರೆಗೆ ಅವಾರ್ಡ್ ಆಗಿದ್ದು ಇನ್ನು 75 ಎಕರೆ, ಭೂಮಿಗೆ ಅವಾರ್ಡ್ ಹಾಗೂ 19(1) ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇನ್ನು ಕೇಲವು ಅವಾರ್ಡ್ ಆಗಿರುವಂತಹ 15 ಜನ ಪಲಾನುಭವಿಗಳಿಗೆ ಮುಂದಿನ ಸೋಮವಾರ ಹಣವನ್ನು ಪಾವತಿ ಮಾಡುವುದಾಗಿ ತಿಳಿಸಿದರು. ಇನ್ನು ಈಗಾಗಲೇ ಕಾಮಗಾರಿ ಆಗಿರುವಂತಹ ಚಾನಲ್ ಭಾಗದಲ್ಲಿ ಮಳೆಯಿಂದಾಗಿ ಚಾನಲ್ ನಲ್ಲಿ ಸುಮಾರು 5 ರಿಂದ 6 ಅಡಿ ಎತ್ತರದವರೆಗೆ ಹೂಳು ತುಂಬಿರುವ ಕಾರಣ ಅದನ್ನು ತೆರವು ಗೊಳಿಸಲು 25 ಲಕ್ಷ ಅನುದಾನ ನೀಡಲಾಗಿದ್ದು ಆ ಕಾಮಗಾರಿಯು ನಡೆಯುತ್ತಿದ್ದು ಈಗಾಗಲೇ ಶೇಖಡ 50ರಷ್ಟು ಕೆಲಸವಾಗಿದ್ದು ಇನ್ನು ಸೇತುವೆಗಳಿರುವ ಭಾಗದಲ್ಲಿ ಮಾತ್ರ ಕೆಲಸವಾಗಬೇಕಿದೆ ಹೂಳು ಹಸಿ ಇರುವುದರಿಂದ ಹಾಗೂ ಮಳೆ ಬರುತ್ತಿರುವುದರಿಂದ ತೆರವು ಕಾರ್ಯ ನಿಧಾನವಾಗಿ ಸಾಗುತ್ತಿದ್ದು ಹೇಮಾವತಿ ನೀರು ಹರಿಯುವುದರೊಳಗೆ ಈ ಕೆಲಸವಾಗಿ ನಮ್ಮ ತಾಲ್ಲೂಕಿಗೆ ಹಂಚಿಕೆಯಾಗಿರುವ ನೀರನ್ನು ಹರಿಸುತ್ತೇನೆ ಎಂದರು.

ಜಿಲ್ಲೆಯ ಲಿಂಕ್ ಕೆನಾಲ್ ಬಗ್ಗೆ ನಾನು ಹೋರಾಟಕ್ಕೆ ಹೋಗಬೇಕಿತ್ತು ಅದರೆ ದೆಹಲಿ ಪ್ರವಾಸ ಮೊದಲೆ ನಿಗದಿಯಾಗಿದ್ದ ಕಾರಣ ನಾನು ಭಾಗವಹಿಸಲು ಸಾದ್ಯವಾಗಲಿಲ್ಲ ಅದರೂ ಜಿಲ್ಲಾ ಕೆಡಿಪಿ ಸಭೆಯಲ್ಲಿ ಈ ಲಿಂಕ್ ಕೆನಾಲ್ ಕಾಮಗಾರಿಯನ್ನು ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡವಳಿ ಬರೆಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದು ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಈ ಲಿಂಕ್ ಕೆನಾಲ್ ಗೆ ಪಕ್ಷಾತೀತವಾಗಿ ಹೋರಾಟ ಮಾಡುತ್ತೆವೆ ಇಂದು ನೀರಾವರಿ ಯೋಜನೆಗಳು ಇವರ ಕುಟುಂಬಗಳಿಗೆ ಸೇರಿದವಾಗಿವೆ ಯಾವೊದೊ ಸ್ವಹಿತಾಸಕ್ತಿಗೆ ಒಂದು ಜಿಲ್ಲೆಯ ರೈತರನ್ನು ಬಲಿಕೊಡುವುದು ಎಷ್ಟು ಸರಿ ಈ ಲಿಂಕ್ ಕೆನಾಲ್ ಯೋಜನೆಯನ್ನು ಕೂಡಲೆ ಕೈಬಿಡಬೆಕೆಂದರು.

48

© ಹುಳಿಯಾರು ಸಮಗ್ರ ಸುದ್ಧಿ . All Rights Reserved.