ಹುಳಿಯಾರು : ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಶಾಲೆಯಲ್ಲಿ ಜೂನ್ ೫ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುರುವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗಿಡಗಳನ್ನು ನೆಡುವುದು, ವಿವಿಧ ಬಗೆಯ ನೃತ್ಯಗಳು ಹಾಗೂ ಮಕ್ಕಳ ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆದವು. ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಶಿಕ್ಷಕರಾದ ಗಿರೀಶ್ ಕೆ.ಎಲ್ ಮಾತನಾಡಿ ಪ್ಲಾಸ್ಟಿಕ್ ಒಂದು ಕರಗದ ವಸ್ತುವಾಗಿದೆ. ಇದನ್ನು ಮಿತವಾಗಿ ಬಳಸಬೇಕು ಇಲ್ಲವಾದರೆ ಇದು ನಮ್ಮ ಪರಿಸರಕ್ಕೆ ಹಾನಿ ಮಾಡುತ್ತದೆ. ಇದನ್ನು ವಿಲೇವಾರಿ ಮಾಡುವುದು ತುಂಬಾ ಕಷ್ಟಕರವಾಗಿದ್ದು ಇದನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು. ಮುಂದಿನ ಪೀಳಿಗೆ ಯವರಿಗೆ ನಮ್ಮ ಭೂಮಿಯನ್ನು ಉತ್ತಮವಾಗಿ ಇಡಲು ಪ್ಲಾಸ್ಟಿಕ್ ನಿಷೇಧ ಸ್ವಾಗತಾರ್ಹವಾಗಿದೆ, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಸಿಹಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷ ಕೆ ಸಿ ಶಿವಣ್ಣ , ಕಾರ್ಯದರ್ಶಿ ಸುಧಾ ಎಸ್, ಸಹ ಕಾರ್ಯದರ್ಶಿ ಲಿಖಿತ ಎಸ್, ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.