ಸೋಮಜ್ಜನಪಾಳ್ಯದಲ್ಲಿ ಉತ್ಸವ ಮೂರ್ತಿಯ ಪೀಠ ಸ್ಥಾಪನೆ.

ಹುಳಿಯಾರು : ಸೋಮಜ್ಜನಪಾಳ್ಯದಲ್ಲಿ ಶ್ರೀ ಅಂತರಘಟ್ಟೆ ದುರ್ಗಮ್ಮ ದೇವಿಯವರ ಉತ್ಸವ ಮೂರ್ತಿಯ ಪೀಠ ಸ್ಥಾಪನೆ ಹಾಗೂ ಹೊಳೆಪೂಜೆ ದೃಷ್ಠಿಪೂಜೆ ಮಹೋತ್ಸವ ಕಾರ್ಯಕ್ರಮ ಮೇ. 07 ರಿಂದ ಮೇ. 09 ರ ಶುಕ್ರವಾರದವೆರೆಗೆ ನಡೆಯಲಿದೆ.
ಬುಧವಾರ ಗ್ರಾಮದೇವತೆ ಶ್ರೀ ದುರ್ಗಮ್ಮ ಮತ್ತು ಶ್ರೀ ಹುಳಿಯಾರಮ್ಮನವರ ಆಗಮನದಿಂದ ಸಂಜೆ 5 ಗಂಟೆಗೆ ವಜ್ರಕ್ಕೆ ಹೊರಡುವುದು. ಮೇ. 08ರ ಗುರುವಾರ ಬೆಳಗ್ಗೆ 4 ರಿಂದ 6 ರವರೆಗೆ ಬ್ರಾಹ್ಮಿ ಲಗ್ನದಲ್ಲಿ ಶಿಲ್ಪಿ ಯೋಗೀಶಾಚಾರ್ ಅವರ ನೇತೃತ್ವದಲ್ಲಿ ದೃಷ್ಠಿಪೂಜೆ ಗಂಗಾಪೂಜೆಯನ್ನು ನೆರವೇರಿಸಲಾಗುವುದು ಹಾಗೂ ಸಂಜೆ 6 ಗಂಟೆಗೆ ಶ್ರೀ ಅಂತರಘಟ್ಟಮ್ಮ ಕೆ.ಸಿ.ಪಾಳ್ಯ ಮತ್ತು ಶ್ರೀ ಅಂತರಘಟ್ಟಮ್ಮ ಹೊಸಹಳ್ಳಿಪಾಳ್ಯ ದೇವರುಗಳ ಆಗಮನವಿರುತ್ತದೆ.
ಮೇ.09 ಶುಕ್ರವಾರದಂದು ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಲಗ್ನದಲ್ಲಿ ಗಂಗಾಪೂಜೆ ಮತ್ತು ನಡೆಮುಡಿಯೊಂದಿಗೆ ಶ್ರೀ ಅಮ್ಮನವರು ಮೂಲಸ್ಥಾನಕ್ಕೆ ದಯಮಾಡಿಸುವುದು. ಬೆಳಗ್ಗೆ 6 ಗಂಟೆಗೆ ಶುಭ ವೃಷಭ ಲಗ್ನದಲ್ಲಿ ಪ್ರಾರಂಭಗೊಂಡು ಮದ್ಯಾಹ್ನ 1 ಗಂಟೆಯವರೆಗೆ ಪಂಚಗಮ್ಯ ಶುದ್ದಿ ಹೋಮ ಆಗಮನ, ಪುಣ್ಯಾಹ ಶುಭ ಮಿಥುನ ಲಗ್ನದಲ್ಲಿ ಗಣಪತಿ ಹೋಮ, ಕಾಳಿಹೋಮ ದುರ್ಗಾಹೋಮ, ನವಗ್ರಹ ಹೋಮ ನಂತರ, ಪೂರ್ಣಾಹುತಿ. ಶ್ರೀ ಅಮ್ಮನವರಿಗೆ ಸಹಸ್ರ ಕುಂಕುಮಾರ್ಚನೆಯನ್ನು ಹಾಗೂ ಮಹಾಮಂಗಳಾರತಿ ಕಾರ್ಯಕ್ರಮವನ್ನು ನಡೆಸಲು ಶ್ರೀ ಅಮ್ಮನವರು ಅಪ್ಪಣೆಯಾಗಿರುತ್ತದೆ, ರಾತ್ರಿ 8 ಗಂಟೆಗೆ ಉಯ್ಯಾಲೋತ್ಸವ ಮತ್ತು ಮದಾಲ್ ಸಿ ಉತ್ಸವ ನಡೆಯಲಿದೆ ಆದ್ದರಿಂದ ಭಕ್ತಾದಿಗಳು ಈ ಭಗವತೀ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.

145

© ಹುಳಿಯಾರು ಸಮಗ್ರ ಸುದ್ಧಿ . All Rights Reserved.