ಹುಳಿಯಾರು ಬಸವ ಜಯಂತಿ ಮಹೋತ್ಸವ

ಹುಳಿಯಾರು : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವ ಜಯಂತಿ ಉತ್ಸವದ ಮೆರವಣಿಗೆ ಪೋಲಿಸರ ಬಿಗಿ ಭದ್ರತೆಯಲ್ಲಿ ಅದ್ದೂರಿಯಿಂದ ಜರುಗಿತು.
ಹೋಬಳಿಯ ಪುರದಮಠ ಗ್ರಾಮದಿಂದ ಬಸವಣ್ಣನವರ ಪುತ್ತಳಿಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಯೊಂದಿಗೆ ಪಟ್ಟಣ ಪಂಚಾಯಿತಿ ಬಳಿಯಿರುವ ಬಸವೇಶ್ವರ ಸಮುದಾಯ ಭವನವನ್ನು ತಲುಪಿ ಭವ್ಯವಾದ ಮಂಟಪದೊಳಗೆ ಬಸವಣ್ಣನವರ ಪುತ್ತಳಿಯನ್ನು ಕೂರಿಸಿ ನಂತರ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಉತ್ಸವಕ್ಕೆ ಚಾಲನೆ ನೀಡಿದರು.
ಮೆರವಣಿಗೆ ಪಟ್ಟಣ ಪಂಚಾಯಿತಿ ಮುಂಭಾಗದಿಂದ ಹೊರಟು ವಾಲ್ಮೀಕಿ ಸರ್ಕಲ್ ಬಳಸಿಕೊಂಡು ಹೆದ್ದಾರಿಯಲ್ಲಿ ಸಾಗಿ ರಾಜ್ ಕುಮಾರ್ ರಸ್ತೆ ಗಾಂಧಿ ಪೇಟೆ ಮೂಲಕ ಬಸವೇಶ್ವರ ಸಮುದಾಯ ಭವನ ತಲುಪಿತು. ಕಾರ್ಯಕ್ರಮದಲ್ಲಿ ವೀರಭದ್ರನ ಕುಣಿತ , ತಮಟೆ ವಾದ್ಯ , ಗೀತೆಗಳಿಗೆ ಯುವಕರು, ಯುವತಿಯರು, ಪುಟ್ಟ ಮಕ್ಕಳು ಕೂಡ ಹೆಜ್ಜೆ ಹಾಕಿದರು, ಹೋನ್ನೆಬಾಗಿ ಶಶಿಧರ್, ಅಭಿಜ್ಞಾ ಮಾಧುಸ್ವಾಮಿ ಹಾಗೂ ತಾಲ್ಲೂಕಿನ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

141

© ಹುಳಿಯಾರು ಸಮಗ್ರ ಸುದ್ಧಿ . All Rights Reserved.